Monday, December 26, 2011

ಕಳೆದು-ಹೋಯಿತು


ಬಾ ನನ್ನ ಮಧುರ ತರಂಗ
ಬಾ ನನ್ನ ಹತ್ತಿರಕೆ
ನಿನ್ನ ಕಾಣದೆ ಬೇಸರಿಸಿ ಬೆಂದಿರುವೆ
ಕಾಯಿಸಬೇಡವೆ ಇನ್ನುಕೆ

ಬೊಗಸೆಯಲಿ ನೀಡಿದದನು
ಕಸಿದಿಕೊಳ್ಳುವುದು ಧರ್ಮವೇ
ನನ್ನ ನೀ ದೂರ ಕಳಿಸಿ
ಕೇಳದಂತೆ ಮಾಡಿದೆಯಾ ನಿನ್ನ ಧ್ವನಿ

ನಿನ್ನೊಂದಿಗೆ ನುಡಿಸಿದ
ಅದ್ಭುತ ಕಾವ್ಯದ ಸುರಗಾನ
ಆರ್ತನಾದಂತೆ
ಕೇಳಿಸುತ್ತಿದೆ

ಕಣ್ಣೀರ ಕೋಡಿಯ
ಹರಿಸದಿರು
ಭಾವುಕತೆಯಲೆ ಜೀವ ತುಂಬಿದೆ
ಬೇಗ ಬಂದೆನ್ನ ಸಂತೈಸು

ದೂರ ನೂಕದಿರು ನನ್ನ
ದೂರ ಮಾಡದಿರು ನನ್ನ
ನಿನ್ನ ಸಂಗದಿಂದಲಿ
ಅರ್ಥಹೀನ ಜೀವನಕ್ಕೆ
ನಾಂದಿ ಹಾಕಬೇಡ


ಮೌನ ಮತ್ತು ಮನಸ್ಸು


ಮೌನ ಮಾತಾಡಿತು
ಮನವೇಕೆ ನನ್ನ ಕರೆಯಿತೆಂದಿತು
ಉತ್ತರವು ಸಿಗದೆ
ಮೌನವು ಮೌನವಾಯಿತು

ಪ್ರೀತಿಯಿಲ್ಲದೆ ಬಳಲಿದ
ಮನ ಮೌನವ ಕರೆಯಿತೇ?
ಪ್ರೀತಿಯಲಿ ಮುಳುಗಿದ
ಮನ ಪ್ರೀತಿ ಕಾಣದಾಗ
ಪ್ರೀತಿಯ ಅರಸಿತೇ?

ಏಕೆ ಮೌನವಾದೆ ಮನವೆ
ನನ್ನೋಡನೆ ಮಾತನಾಡಬಾರದೆ
ಎಂದನ್ನಿತು ನಗೆಯು
ತುಸುನಗೆಯು ಮೂಡಿ
ನೀರಿನ ತರಂಗದಂತೆ
ಮಾಯವಾಯಿತು

ಮೌನವ ತಬ್ಬಿದ ಮನ
ಪ್ರೀತಿಯ ಭಾವಕೆ
ಮರುಗುತ್ತಿದೆಯೆ
ಏನೂ ತಿಳಿಯದ ಗೊಂದಲದ ಮನವು
ಮೌನಕ್ಕೆ ಶರಣಾಯಿತು


Thursday, December 22, 2011

ಇಲ್ಲ-ತಲೆಬರಹ


ಕೈಯಲ್ಲಿ ಮೊಬೈಲು
ಕಿವಿಯಲ್ಲಿ ಇಯರ್ ಫೋನು
ಹಾಡೊಂದು ತನ್ನ ಪಾಡಿಗೆ
ಹಾಡುತಿರಲು

ತಲೆಯಲ್ಲಿ ನಾನಾ ವಿಚಾರಗಳು
ತಿರು ಪ್ರಶ್ನೆಗಳು ಮನಕೆ
ನಾನಾ ಅದುವಾ
ಹಾಡು-ವಿಚಾರ

ಎಲ್ಲೊ ಮಳೆಯಾಗಿದೆಯೆಂದು
ಎಲ್ಲೋ ಮನ ಜಾರಿದೆಯೆಂದು
ಮನವದು ಹೋಲಿಸುತಲಿಹುದು
ಹಾಡನು ಭಾವನೆಯನು

ರೆಪ್ಪೆಯ ಮುಚ್ಚಲು
ಕಣ್ಣದು ನೋಡಿತು
ಸ್ವಪ್ನವನು

ಕಣ್ಣಲಿ ಕಂಡಿತು
ಮಿನುಗುವ ಮಿಂಚದು
ಹೋಲಿಸಿತು ಇದನು
ಭಾವಾರ್ಥದಲಿ

Thursday, December 15, 2011

ಬಂಧಿ


ನೆನಪುಗಳ ಸೆರೆಮನೆಯಲ್ಲಿ
ನಾನು ಬಂಧಿತೆ
ಹೊರ ಬರಲು ಕಾಯುತಿರುವೆ
ಜಾಮೀನು ಹೇಳಿಕೆ

ಅತ್ತ ಅಳಲು ಬಾರದೆ
ಅತ್ತ ನಗಲು ಬಾರದೆ
ಭಾವಗಳ ಸರಳುಗಳಲಿ
ಹಿಡಿಯಲ್ಪಟ್ಟಿರುವೆ

ಬೇಡುತಿರುವೆ ದೇವನಲಿ
ಬಿಡಿಸೆನ್ನನು ಈ ಬಂಧನದಿ
ಕೊಡು ನೀನು ಜಗವ ಎದುರಿಸುವ
ಚಲ ಭಲ
ನೆಮ್ಮದಿ

Monday, December 5, 2011

ಹೊಗೆ..ಬದುಕು..





ಎಲೆ ಮಾನವ
ನಿನ್ನ ನೀನೆ ಹೊಗೆಯ ಬಲೆಗೆ
ನೂಕುತ್ತಿರುವೆ
ಸಾವಿಗಂಚಿನ ಕನ್ನಡಿಯ
ತೋರಿ ಮರೆಮಾಚುತಿರುವೆ


ಬೇಕಿಲ್ಲವೆ ಚಂದ ಚೊಕ್ಕದ
ಪ್ರಶಾಂತ ಹ್ರದಯ
ಕೆಟ್ಟ ರಕ್ತದ ಜೊತೆ ಬೇಕಿತ್ತೆ
ನರಳಾಟ

ಗೊತ್ತಿರುವುದು ನಿನಗೆ
ಸಾವು ಖಚಿತವೆಂದು
ಬೇಕಂತಲೆ ಕರೆಯುತಿರುವೆ
ಬಾ ಬೇಗ ನನ್ನ ಬಳಿಗೆ ಎಂದು


ಹೊಗೆಯ ನಡುವಿನಲಿ ಬದುಕು
ಹೇಗೆ ಕಂಡೀತು ಚೆಲುವು
ಮಸುಕಿನ ಚಿತ್ರಣದ ಹೊರತು
ಬೇರೆನು ಕಾಣದು


ತೆರೆ ಮರೆಯ ಪರದೆಯ
ಒಮ್ಮೆ ನೀನು ತೆರೆದು ನೊಡು
ನಿನ್ನ ನೀನು ಮರೆಯಬೇಡ
ಚೊಕ್ಕಣದ ಪುಟದಲಿ ನೋಡು ನಿನ್ನ


ರೋದಿಸುವ ಮನಕೀಗ ಬೇಕಿಲ್ಲ
ಹೊಗೆಯ ಸಾಂತ್ವಾನ
ನೊಂದವಕೆ ಕೋಡು ನೀನು
ಹೊಗೆ ರಹಿತ ಜೀವನ




ನಾನು-ರೋಬೋಟ್-ಹುಡುಗಿ





ಭಾವನೆಗಳ ಸಮ್ಮಿಳಿತಕೆ
ಭಾರವಾಗಿದೆ ಮನಸು
ತುಸು ನಗುವು ಮುಖ ತುಂಬ
ಕಂಬನಿಯು ಜಾರುತಿರೆ
ಕೂಗಿ ಕರೆಯಿತು
ಅಪ್ಪುಗೆಯ ಬಂಧನವ


ಬೇಕೆನಿಸಿದೆ ಪ್ರೀತಿಯ
ಬೊಗಸೆಯ ನೋಟ
ಸಾಕೆನಿಸಿದೆ ಬಯಲೊಳು
ಗುರಿ ಇಲ್ಲದ ಓಟ

ರೋಬೋಟಿನಂತೆ
ದಿನ ಬೆಳಗಿನ ದಿನಚರಿ
ಭಾವನೆಗಳಿಲ್ಲದ ಮನವು
ಕೊರಗುತಿದೆಯೆ

ಬಾ ಎಂದು ಕೂಗಿಗೆ
ಮನ ಕರಗೀತೆ
ಸದ್ದಡಗಿ ಕೂತಿದೆ
ಕರಗಳ ಸ್ವರ ಗೀತೆ


Monday, November 28, 2011

ಸಂಕೋಚ

ತಳಮಳ
ಮನದ ಬೇಗೆಯನು ಹೇಳಿಕೊಳ್ಳಲು
ಕಳವಳ

ಕೂತು ಬಿಡುವೆನು ಏಕಾಂತ ಸಿಗಲು
ಬೇಕಿಲ್ಲ ಯಾರು
ಮಧುರ ಸಂಗೀತ ಸಾಥ ನೀಡಲು

ಚಂಚಲತೆಯ ಪ್ರತಿಬಿಂಬದ ರೂಪವನು ಬಿಂಬಿಸುತ
ತಡೆಹಿಡಿದ ಭಾವನೆಗಳ
ತಡೆ ರಹಿತ ಚಲನವೆ ಇದು




Wednesday, November 23, 2011

ಇದುವೇ???

ಕತ್ತಲೆಯಲಿ ಬೆಳಕೊಂದು ಮೂಡಿದೆ
ಅದ ಹಿಡಿಯಲು ನಾ ಓಡುತಿರೆ
ಮಾಯಾವಿಯ ಲೋಕವೇ ಇದು???

ಹುಚ್ಚು ಮನವು ಬಯಸುತಿದೆ
ಹಕ್ಕಿಯಂತೆ ಹಾರಾಡಲು
ವಿಸ್ಮಯತನದ ರೂಪವೇ ಇದು???

ಬರಡಾದ ಮನವು
ಓಯಸಿಸನ ಎದಿರು ನೋಡುತಿದೆಯೆ
ನಿರೀಕ್~ಷೆಯ ಹಂಬಲವೇ ಇದು???






Monday, November 21, 2011

ಅಪೇಕ್ಷೆ

ಕೂಗುತಿಹುದು ಮನದ ಗಡಿಯಾರ
ಎಚ್ಚರದ ಘಂಟೆಯನು ನೆನಪಿಸುತ

ಬದುಕುವುದು ಮೂರು ಕ್ಷಣ
ಅದರಲ್ಲಿ ಜಿಪುಣುತನ
ಲೋಕದ ನೀತಿಯು
ಪ್ರೀತಿ ಪ್ರೇಮ ಪ್ರಣಯವು

ಅಲ್ಲಿ ನೋಡು ಅವನೆಂದು
ಬೆಟ್ಟು ಮಾಡಿ ತೊರಿದರೆ
ಉಳಿದ ಬೆರಳುಗಳೆಲ್ಲವುಗಳು
ನಿನ್ನನೆ ನೊಡುತಿರೆ

ಧಾವಿಸದಿರು ಓ ಚಿನ್ನ
ಬಾ ಬೇಗ ಬೆಳಕಿನೆಡೆ
ತಾಳಿದವನು ಬಾಳಿಯಾನು
ಎಂಬುದರ ನೆಲೆ ಕಾಣು
ಮಾನವೀಯತೆಗೆ ಬೆಲೆ ನೀಡು
ಅನುಸರಿಸು ಕರುಣೆ ಒಲವಿನ ನೀತಿಯನು


ಏನೆಂಬುದು?

ಯಾರು ಬಲ್ಲರು ಮನವ
ಏಕತೆಯ ಬಲವ
ತಾನು ತನ್ನದು ಎಂಬಿದರ ಗೋಡೆಯಲಿ
ಕತ್ತಲೆಯ ಎದುರಿಹರು
ಜನರೆಲ್ಲ

ತಾನು ತನದೆಂಬುದೇನಿಲ್ಲ
ಇಡು ನೀ ವಿಶ್ವಾಸವ ಮನುಜರೊಡನೆ
ತರ್ಕಕ್ಕೆ ನಿಲುಕದ ಮಾತುಗಳು ನೂರು
ಅರಿ ಅದರ ಭಾವುಕತೆಯ ತಿರುಳು
ಇಡು ಮುಂದೆ
ಅದ ನೀ ತಿಳಿದು



Saturday, November 19, 2011






ತಣ್ಣನೆಯ ಗಾಳಿ






ಗಾಳಿಯು ಬೀಸುತಿದೆ
ತಣ್ಣನೆಯ
ಆರೋಹಣದೆತ್ತರದಲಿ
ತಣ್ಣನೆಯ

ಹಕ್ಕಿಗಳ ಕಲರವ
ಗೂಡು ಸೇರುವ ಹೊತ್ತು
ಸೂರ್ಯನು ಇಳಿಯುವ
ಮುಸ್ಸಂಜೆ ಹೊತ್ತು
ಗಾಳಿಯು ಬೀಸುತಿದೆ

ಹಾರುವ ಗರಿಗಳು
ಕೂಗುವ ಸ್ವರಗಳು
ಮನವ ತಣಿಸುವ
ಸಂಜೆಯ ಹೊತ್ತು
ಗಾಳಿಯು ಬೀಸುತಿದೆ



ಕಪ್ಪು-ಬಿಳಿಪು





ಇಂದಿನ ರಾಜಕಾರಣವು
ಕಪ್ಪು-ಬಿಳುಪಿನ ಪರದೆಯಾಟ
ಎಂದಿಗೂ ಇದಕಿಲ್ಲ ಮುಕ್ತಿ
ಕೊಡು ತಾಯೆ ಇದ ಎದುರಿಸುವ ಶಕ್ತಿ


ಮರೆ


ಮನಸಿನಾಳದ ನೋವ
ಹೇಳಿಕೊಳ್ಳಲಿ ಎಲ್ಲಿ
ತತ್ತರಿಸಿದೆ ಮನ
ಬಾಳ ಬೆಂದಾಟದಲಿ
ಕೊರಗುತಿದೆ ಈ ನನ್ನ ಅಂತರಾಳ
ಕಂಬನಿಯ ಹೊರಗಟ್ಟದೆ

ಬಾಳ ಯಾತನೆಯನು
ಹೇಗೆ ಬಚ್ಚಿಡಲಿ ಎದುರಿಗೆ
ಒಡಲ ಬೆಂಕಿಯ ನಂದಿಸಲು
ನಲುಮೆಯ ಅಕ್ಕರೆಯ ಸಾಂತ್ವನ ಬೇಕಿದೆ

ಬಯಸುತಿದೆ ಪ್ರೀತಿ ತುಂಬಿದ ಹ್ರದಯ
ಆದರೆ ಎಲ್ಲೆಡೆಯು ತೋರುತಿದೆ
ಪ್ರೀತಿಯ ಮೊಗವಿರಿಸಿದ ಹ್ರದಯ
ಬೇಕಿಲ್ಲ ಇನ್ನೀಗ ಮನಕೆ ಮುದ ನೀಡುವ ಶಾಂತ
ಹಾರಾಡಬೇಕಿದೆ ಆಕಾಶದಲಿ ಹಕ್ಕಿಯಂತೆ ಈಗ



ಓ ನನ್ನ ಅಂತರಾತ್ಮ- ಜೀವ






ಎಲ್ಲಿ ಮರೆಯಾದೆ ಓ ಜೀವ
ನನ್ನನ್ನು ಕಾಯುತ್ತಿದ್ದ
ನನ್ನ ಸಂತೋಷದ ಸ್ಪೂರ್ತಿಯ ರೂಪ
ಬದುಕಿನ ಜಂಜಾಟದ ಬೇಗೆಯ ಚಿಂತಿಸದೆ
ಚಂಚಲವಾಗಿದ್ದ ಮನ
ಈಗ ಒಂಟಿಯಾಗಿದೆ

ತಾಸುದ್ದ ಕೂತು ಕಂಡಿದ್ದ ಕನಸು
ನಿಮಿಷದುದ್ದಕ್ಕೂ ಆಡಿದ ಮಾತು
ಕಣ್ಣಿನ ಮುಂದೆ ನನ್ನನ್ನೆ ಅಣಕಿಸುತ್ತಿದೆ

ಕಣ್ಣಲ್ಲಿ ಕಣ್ಣಿಟ್ಟು
ಕೈಯಲ್ಲಿ ಕೈಯ್ಯಿಟ್ಟು ಕೊಟ್ಟ ಭರವಸೆ
ನನ್ನ ಬಿಟ್ಟು ದೂರ ಹೋದಂತೆ ಅನಿಸುತ್ತಿದೆ

ಮಗುವಿನಂತೆ ಮಡಿಲಲ್ಲಿ ಮಲಗಿ
ಮಕ್ಕಳಾಟ ಆಡಿದ್ದು
ಕಣ್ಣಿಂದ ದೂಅ ಸರಿಯುತ್ತಿದೆ

ಎಲ್ಲದಕ್ಕೂ ಸ್ಪೂರ್ತಿಯ ಸೆಲೆಯಾಗಿದ್ದ ಓ ನನ್ನ ಜೀವವೆ
ನನ್ನ ಅಂತರಾತ್ಮವೆ
ಎಲ್ಲಿ ಮರೆಯಾದೆ





ಪ್ರಾರ್ಥನೆ

ಶಿರವ ಬಾಗಿಸಿಹೆನು ನಿನ್ನಡಿಗೆ
ತರಲಿ ಬಾಳಿನಲಿ
ಸಂತಸದ ಹೊನಲು ನಗೆ
ಮುಸುಕಿದೆ ಮತ್ಸರ ಗುದಾಟದ ಬಲೆ
ತೂರಿ ಬೀಸುತಿಹರು ಸೆಳೆಯಲು
ಪ್ರೀತಿ ತುಂಬಿದ ಜೀವಗಳನು
ಓ ನನ್ನ ಗೆಳತಿ
ಎಚ್ಚರ

Friday, August 19, 2011

ಮುಪ್ಪು-ನನ್ನ ಅನಿಸಿಕೆಗಳು





ಕೈಯಲ್ಲಿ ಊರುಗೋಲು, ಮಾಸಿದ ಬಟ್ಟೆ, ಕಣ್ಣಿಗೆ ದಪ್ಪ ಕನ್ನಡಕ , ಕೈ ಕಾಲುಗಳು ನಡುಗುತ್ತಿದ್ದರೂ ಸಂಜೆಯ ವಿಹಾರಕ್ಕೋ ಸಾಮನು ಖರೀದಿಗೋ ಬರುವ ಅಜ್ಜ-ಅಜ್ಜಿಯಂದಿರನ್ನು ನೋಡಿದರೆ ಮನ ಸಂಕಟಗೊಳಗಾಗುತ್ತೆ. ಸಣ್ಣ ಪುಟ್ಟ ಕಾಯಿಲೆಗೆ ನಮ್ಮ ಶಕ್ತಿ,ಆಸಕ್ತಿ ಕಳೆದುಕೊಳ್ಳುವ ನಾವು ಅವರನ್ನು ನೋಡಿ ನಾಚಿಕೆಗೊಳಬೇಕಷ್ಟೆ.

ನಮ್ಮ ಅಜ್ಜ-ಅಜ್ಜಿಯಂದಿರನ್ನೆ ಉದಾಹರಣೆಗೆ ತೆಗೆದುಕೊಂಡರೆ ಅವರು ಮನೆಯಲ್ಲಿ ಚಟುವಟಿಕೆಯಲ್ಲಿ ಲವಲವಿಕೆಯಲ್ಲಿ ತಾವಿನ್ನು ಮುಪ್ಪಿನಾವಸ್ಥೆಗೆ ತಲುಪಿದ್ದೆವೆ ಅನ್ನೊದನ್ನೆ ಮರೆತಿರುವಂತೆ ಇರುತ್ತಾರೆ. ಊಹೆಗು ನಿಲುಕದ ವಿಚಾರಗಳು ಸುಳಿದಾಡುತ್ತವೆ. ಅವರ ಮುದಿತನ ಕೆಲಸ ಕಾರ್ಯಕ್ಕೆ ಸ್ಪಂದಿಸದಿದ್ದರೂ ತಮ್ಮ ಸಹಾಯ ಹಸ್ತ ಹೊಂದಿಸಲು ಹೆಣಗಾಡುತ್ತಾರೆ. ತಮ್ಮ ಅಸಹಾಯಕತೆಗೆ ಕೊರಗುತ್ತಾರೆ.

ಮರೆವು ಮುಪ್ಪಿನ ಸಂಗಾತಿ. ಹಳೆಕಾಲದ ನೆನಪುಗಳು ನಿನ್ನೆಯ ನೆನಪಿನಂತಿರುತ್ತವೆ,ಈಗಿನ ನೆನಪುಗಳು ನೆನಪಿನ ಆಳಕ್ಕೆ ಇಳಿಯುವುದಿಲ್ಲ. ಆದರೆ ನಮ್ಮ ಕಾಲಮಾನಕ್ಕೆ ಮುಪ್ಪು ಅನ್ನೊದು ೪೦ ರ ಆಸು ಪಾಸಿನಲ್ಲಿ ಬರಬಹುದೆಂಬ ಹೇಳಿಕೆ :)

ತಮ್ಮ ಮನೆಯ ಮಕ್ಕಳ,ಮೊಮ್ಮಕ್ಕಳ ಉನ್ನತಿ,ವಿದ್ಯಾಭ್ಯಾಸಗಳ ಕುರಿತು ತಮ್ಮ ಆಜು ಬಾಜುವಿನ ಮನೆಯವರಿಗೆ ಹೇಳುವ ಪರಿ ಮನಸಿಗೆ ಮುದ ನೀಡುತ್ತವೆ. ಆದರೆ ಒಮ್ಮೊಮ್ಮೆ ತಮ್ಮ ಮುಪ್ಪಿನ ಬಗ್ಗೆ ಕೊರಗುವುದನ್ನು ಕಂಡು ಬೇಸರವಾಗುತ್ತದೆ. ಕಷ್ಟ ಕಾಲಗಳು ದೂರವಾಗಿ ಮನಸ್ಸು ನೆಮ್ಮದಿಯಿಂದ ಬದುಕುವ ಕಾಲದಲ್ಲಿ ಮುಪ್ಪು ಆವರಿಸಿ ಅವರ ಬದುಕುವ ಚೈತನ್ಯವನ್ನು ಕಸಿಯುತ್ತದೆ. ದೈಹಿಕ,ಮಾನಸಿಕ ಕಾರಣೀಭೂತಗಳು.

ಇನ್ನೋಂದೆಡೆ ,ವ್ರದ್ಧಾಶ್ರಮದಲ್ಲಿ ತಮ್ಮ ಕೊನೆಯ ಕ್ಷಣಗಳನ್ನು ಎಣಿಸುವ ತಾತ ಅಜ್ಜಿಯರನ್ನು ನೋಡಿದರೆ ಕಣ್ಣಲ್ಲಿ ತನ್ನಿಂದ ತಾನೆ ಕಣ್ಣೀರು ಹರಿದು ಕಣ್ಣು ತೇವಗೊಳ್ಳುತ್ತದೆ. ಚಿಕ್ಕಂದಿನಲ್ಲಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಉನ್ನತೋತ್ತಿಗೆ ಏರಿಸಿದವರನ್ನು ಮನೆಯಿಂದ,ಮನಸ್ಸಿಂದ ಹೊರದೊಬ್ಬುವ ಜನರಿಗೆ ಮನಸ್ಸು ಕ್ರೂರ ಭಾವನೆ ತಾಳುತ್ತದೆ. ಸುಖದ ಉಪ್ಪರಿಗೆಯಲ್ಲಿ ಇರುವಂತೆ ಮಾಡಿದ ದಿವ್ಯ ಚೈತನ್ಯಗಳಿಗೆ ಕತ್ತಲೆಯ ಜೀವನ ಒದಗಿಸುವುದು ನ್ಯಾಯವೇ???

ಪ್ರಕಟನೆ:
ಮನಸ್ಸಿಗೆ ಅನಿಸುವುದನ್ನು ಪ್ರಕಟಿಸುವುದು ತುಂಬಾ ಕಷ್ಟ ಆದರೂ ಚಿಕ್ಕ ಪ್ರಯತ್ನ.

ಕೊನೆಯಲ್ಲಿ ಒಂದು ಮಾತು.. ಇದ್ದಷ್ಟು ದಿನ ಮಾನವೀಯತೆಯಿಂದ ಬದುಕುವುದು ಲೇಸು. ಬದುಕಿ, ಬೇರೆಯವರಿಗೂ ಬದುಕಲು ಬಿಡಿ.

Sunday, July 3, 2011

ಮಳೆಗಾಲದ ಒಂದು ದಿನ...




ಮಳೆಯ ಸೊಬಗನ್ನು ಮನೆಯ ಬಾಲ್ಕನಿಯಲ್ಲಿ ನಿಂತು ನೋಡುತ್ತಿರುವ ಸಮಯ.ಆಗಸದಿಂದ ಮಳೆಯ ಹನಿಗಳು ಟಪ ಟಪ ಎಂದು ಭೂಮಿಗೆ ಮುತ್ತಿಕ್ಕಿ ಗುಂಪುಗೂಡಿ ಒಟ್ಟಾಗಿ ಹರಿಯತೊಡಗಿದವು.ಕನ್ನಡ ಶಾಲೆಯ ಗುರುಗಳು "ಮಳೆಗಾಲದ ಒಂದು ದಿನ"ದ ಬಗ್ಗೆ ಬರೆದು ತರಲು ಆಜ್ಣಿಸಿದ್ದು ನೆನಪಾಗಿ ಭೂತಕಾಲದ ನೆನಪುಗಳಿಗೆ ಓಗೊಟ್ಟಿತು :)ಅಮ್ಮನ ಸಹಾಯಗೂಡಿ ಒಂದು ಪುಟದಲ್ಲಿ ಮಳೆಗಾಲದ ಒಂದು ದಿನದ ಮಜಾವನ್ನು ಬರೆದು,ಗುರುಗಳಿಂದ ಶಹಭಾಶಗಿರಿ ಖುಷಿ ತಂದಿತ್ತು.

ಮಳೆಗಾಲ ಶುರುವಾಗಲು,ಶಾಲಾ-ಕಾಲೇಜುಗಳು ತಮ್ಮ ದಿನಚರಿ ಪ್ರಾರಂಬಿಸುತ್ತಿದ್ದವು. ಮನೆಯಲ್ಲಿ ಮಳೆಗಾಲದ ತಯಾರಿ ಶುರುವಾಗಲು,ನಮ್ಮ ಶಾಲಾ ತಯರಿಯು ಶುರುವಾಗುತ್ತಿದ್ದವು.ಮಳೆಗಾಲದ ಚಪ್ಪಲು,ಹೊಸ ಪಾಠಿ ಚೀಲ,ರೈನ್ ಕೋಟ್, ಹೊಸ ಪುಸ್ತಕ,ಪಟ್ಟಿ..ವ್ಹಾ :) I really miss it now. ಪಟ್ಟಿಗಳಿಗೆ bind ಹಾಕುವುದು,label ಅಂಟಿಸುವುದು.. :) ನೀರು ತಗುಲಬಾರದೆಂದು plastic cover protection.ಕೆಲವೊಮ್ಮೆ ಪಾಠಿಚೀಲಕ್ಕು ಸಹ.. ಪಾಠಿ ಒರೆಸಲು ಮಳೆಗಾಲದ ನೀರುಬಳ್ಳಿ ಸಂಗ್ರಹ.ಮಜ ಮೋಜು.
ತಂಗಿ ಒಟ್ಟಿಗೆ ರೈನ್ ಕೋಟ್ ಹಾಕಿ ಕೈ-ಕೈ ಹಿಡಿದು ಶಾಲೆಗೆ ಹೊಗುವ ಸಡಗರ.

ನನ್ನ ಅಜ್ಜನ ಮನೆ,ಪಟ್ಟಣದ ಒಂದು ಚಿಕ್ಕ ಹಳ್ಳಿ. ಅಲ್ಲಿ ಮಳೆಗಾಲದಲ್ಲಿ ಹಳ್ಳ ತೋಡುಗಳು ಕೆಂಪು ನೀರಿಂದ ತುಂಬಿ ಹರಿಯುತ್ತಿದ್ದವು.ಅದನ್ನು ನೋಡಿದರೆ ಭಯ ಆಗುತ್ತಿತ್ತು.ಒಂದು ಹಳ್ಳ cross ಆಗಲು ಸಂಕ.ಮಳೆ ನೀರಲ್ಲಿ ಆಡಬಾರದೆಂಬ ಕಟ್ಟಪ್ಪಣೆ ಅಪ್ಪ ಅಮ್ಮಂದಿರಿಂದ.ಆದರು ಕೆರೆಯಲ್ಲಿ ಕಾಲು ಚಾಚಿ ಆಡುತ್ತಿದ್ದೆವು.

ಶಾಲಾ ದಿನಗಳಲ್ಲಿ ಮಳೆಗಾಲದಲ್ಲಿ ರಜೆಯ ಮೋಜು.ಮಳೆ ತುಂಬಾ ಜೋರು ಬಂದರೆ ಕಪ್ಪು ಹಲಗೆಯಲ್ಲಿ ಬರೆಯುತ್ತಿದ್ದದ್ದು ಕಾಣುತ್ತಿರಲಿಲ್ಲ.ಗುಡುಗು ಮಳೆ ಜೋರಾದರೆ teacher ಧ್ವನಿ ಕೇಳಿಸುತ್ತಿರುಲಿಲ್ಲ.ಪಕ್ಕದ ಊರಿನ ನದಿಗೆ ಪ್ರವಾಹ ಬಂತೆಂದರೆ ನಮಗೆ ರಜಾ.

ಈಗ ಇದನ್ನೆಲ್ಲ ನೆನಪಿಸಿಕೊಂಡು ಅಮ್ಮನ ಕೈಯ ಹಲಸಿನಕಾಯಿಯ ಹಪ್ಪಳ,ಚಿಪ್ಸ್ ತಿನ್ನೋದೆ ಚಂದ.ಹೀಗೆ ಆಲೋಚನೆ ಮಾಡುತ್ತ ಮಳೆಗಾಲದ ಒಂದು ದಿನ ಕಳೆದು ಹೋಯಿತು :)

बार बार आति है मुजको मधुर याद बचपन तेरि
गया ले गया तु जीवन कि सबसे मस्त खुशि मेरि

आ जा बचपन ऎक बार फिर दे दे अपनि निर्मल शांति
व्याकुल व्यथा मिटाने वालि वो अपनि प्राक्रत विष्रांति



Friday, April 22, 2011

Untitled


ಮುಸ್ಸಂಜೆಯ ಸಮಯ
ಸುಂದರ ಕಡಲ ತೀರ
ಸೂರ್ಯ ಪಶ್ಚಿಮ ದಿಕ್ಕಿನಲ್ಲಿ
ನಾನು ಉಸುಕಿನ ದಾರಿಯಲ್ಲಿ

ಹೋದೆನು ತುಂಬಾ ದೂರ
ಸಮುದ್ರದ ಅಲೆಯ ಭೀಕರ ಆಟ
ಕತ್ತಲು ಸರಿಯಿತು
ಮನೆಗೆ ಹೋಗುವ ಕಾತುರ

ತಿರುಗಿ ಹೊರಟಿತು ಪಯಣ
ಮನೆಯ ಕಡೆಗೆ
ಕಾಣದಾದೆನು ಸಂಗಾತಿಯ
ಎಲ್ಲಿ ಮಾಯವಾಯಿತೊ ನೆನಪುಗಳು.....

Wednesday, April 6, 2011

ಇಲ್ಲಿಯವರೆಗೆ . . .







ಮನೆಯ
ಬಾಲ್ಕನಿಯಲ್ಲಿ ಕುರ್ಚಿ ತಂದಿರಿಸಿ,ಸಂಜೆಯ ತಂಗಾಳಿಗೆ ಮೈಯ್ಯೊಡ್ಡಿ ಕುಳಿತೆನು. ಐದನೆ ಮಹಡಿಯಲ್ಲಿ ಕೂತು ಸೂರ್ಯಾಸ್ತದ ಸೊಬಗನ್ನು ಸವಿಯುವುದರ ಮಜಾ ಅನುಭವಿಕೆಯಲ್ಲಿದೆ.ಹಾಗೆಯೆ ಸಮಯ ಕಳೆದಂತೆ ಸೂರ್ಯನು ತನ್ನ ಮನೆಗೆ ತೆರಳಿ ಚಂದ್ರನ ಆಗಮನವು ಅಣಿ ಗೊಳ್ಳುತ್ತಿರುವಾಗ ಮನಸ್ಸು ತನ್ನ ನೆನಪಿನ ಸುರುಳಿಯನ್ನು ಬಿಚ್ಚಿಕೊಳ್ಳಲು ಶುರು ಮಾಡಿತು.ಸುಮಾರು 20 ವರ್ಷದ ಹಿಂದಿನ ಕಾಲಚಕ್ರಕ್ಕೆ ಮನಸ್ಸನ್ನು ಕೊಂಡೊಯ್ಯಿತು.


ಮನೆಗೆ
ಹಿರಿಮಗಳಾಗಿ ಹುಟ್ಟಿದ ನಾನು,ಅಪ್ಪ ಅಮ್ಮನ ಅಕ್ಕರೆಯ ಬೈಗುಳದಿಂದಲೇ ಬೆಳೆದೆನು. ಬಾಲವಾಡಿಯಿಂದ ಸ್ವತಂತ್ರತೆಯ ಜೀವನವೂ ಪ್ರಾರಂಭವಾಯಿತು.ಈ ಸಮಯದ ಘಟ್ಟದಲ್ಲಿ ಹಲವು ಘಟನೆಗಳು ಅಚ್ಚೊತ್ತಿದವು,ಹಲವು ಮಳೆಯ ನೀರಿಗೆ ಭೂಮಿಯ ಮೇಲ್ಪದರ ಕೊಚ್ಚಿ ಹೋಗುವಂತೆ ಸೂಚನೆಯೆ ಇಲ್ಲದೆಯೆ ಮರೆಯಾದವು.


primary school life
ಮಸ್ತ್ ಮಜಾ ಇತ್ತು.ಅಕ್ಕೋರು,ಬಾಯೊರು,ಮಾಸ್ತರ್ರು ಅಂತ ಹೇಳಿಕೊಂಡು ಗುರುಗಳ ಹಿಂದೆ ಮುಂದೆ ಸುತ್ತಾಡಿಕೊಂಡಿದ್ದ ಕಾಲ. ಇದ್ದುದರಲ್ಲಿಯೆ ಚಿಂದಿ ಉಡಾಯಿಸುತ್ತಿದ್ದೆವು. ದಿನ ಪಂಚಾಂಗ ಬರೆಯುವುದು,ಗಾದೆ ಮಾತು ವಿಸ್ತರಣೆ,ನಿತ್ಯದ news paper ಮುಖ್ಯಾಂಶ ಓದುವುದು,ರಂಗೋಲಿ ಬಿಡಿಸುವುದು,ಆಣಿಮುತ್ತುಗಳು ಹತ್ತು ಹಲವಾರು ಕೆಲಸಗಳು ದಿನ ನಿತ್ಯ ನಡೆಯುತ್ತಿದ್ದವು."ಜೈ ಭಾರತ ಜನನಿಯ ತನುಜಾತೆ" ಎಂಬ ಕುವೆಂಪು ರಚಿತ ನಾಡಗೀತೆಯೊಂದಿಗೆ ಶಾಲೆ ಶುರುವಾಗಿ "ಜನಗಣ ಮನ ಅಧಿನಾಯಕ ಜಯ ಹೇ" ದಿಂದ ದಿನದ ರಂಜನೆಯ ಕ್ಷಣಗಳು ಕಳೆಯುತ್ತಿದ್ದವು.ಕಸದ ಪಾಳಿ,ನೀರಿನ ಪಾಳಿ..ಬರೀ ಪಾಳಿಗಳದ್ದೇ ಭರಾಟೆ. :) ರಾಜ ರಾಣಿಯರಾಗಿ ಮೆರೆಯುತ್ತಿದ್ದಂತ ಸುಮಧುರ ಹೊತ್ತುಗಳು.ಕೋಲಾಟ,ಗುಂಪು ನ್ರತ್ಯ,ದೀಪ ನ್ರತ್ಯ,ನಾಟಕ ವಿವಿಧ ಪಠ್ಯೇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ,ಪ್ರತಿಭಾ ಕಾರಂಜಿಯಂತಹ programs,ಸಮುದಾಯದತ್ತ ಶಾಲೆ ಇನ್ನೂ ಕಣ್ಣೆದುರಿಗೆ ಪರದೆ ಕಟ್ಟಿದಂತಿದೆ.ಅದರೊಟ್ಟಿಗೆ ಗುರುಮಾತೆಯರ ಸಹಕಾರ,ಹುರಿದುಂಬುವಿಕೆ ಇನ್ನಷ್ಟು ಪ್ರೊತ್ಸಾಹಪೂರಕವಾಗಿದ್ದವು.


high school life
ಬಂದೇ ಬಿಟ್ಟಿತು.maturity level will be a bit high (no comparision with present :P) .ನಿರಂತರ ಚಟುವಟಿಕೆಯ ಜೀವನ. ಪ್ರಾಥಮಿಕ ಶಾಲೆಯ ನೆನಪುಗಳನ್ನು ಹೊತ್ತುಕೊಂಡು ಹೊಸ ರೀತಿಯ ಬದುಕು ಇರಬಹುದೆಂಬ ಸಂಶಯದಲ್ಲಿ ಶುರುವಾಯಿತು ಮೆಟ್ರಿಕ್ ಶಾಲಾ ಜೀವನ.ಹಾಡು,ಭಾಷಣ,ಪ್ರಬಂಧ,ನ್ರತ್ಯಗಳಂತಹ competitions ಗಳಲ್ಲಿ ಭಾಗವಹಿಸಿ ಪ್ರಶಸ್ತಿ ದೋಚುವಿಕೆ,ತಂದೆ ತಾಯಂದಿರ ಪ್ರೋತ್ಸಾಹ...ಇದನ್ನೆಲ್ಲ ನೆನೆಸಿಕೊಂಡರೆ ಇನ್ನೊಮ್ಮೆ ವರ್ಷಗಳು ಪುನಃ ಮರುಕಳಿಸುವುದೇ ಎಂಬ ಬಯಕೆ ಮನದ ಮೂಲೆಯಲ್ಲಿ ಚಿಗುರೊಡೆಯುತ್ತೆ.ಗೆಳೆತಿಯರ ಗುಂಪುಗಾರಿಕೆ,ಹರಟೆ ಕಣ್ಣನ್ನು ತೇವ ಮಾಡಿ ಸಂತ್ರಪ್ತ ಭಾವ ಮೂಡಿಸುತ್ತದೆ .ಗೆಳತಿಯರ ಸಂಘದಲ್ಲಿ ಮಾಡಿದ ಮೋಜು,ಮಜಾ,ಗಮ್ಮತ್ತು ಮುಖದಲ್ಲೊಮ್ಮೆ ಮಂದಹಾಸ ಸುಳಿದಾಡುವಂತೆ ಮಾಡುತ್ತದೆ :) :)


ಇನ್ನು
ಬಂದಿದ್ದೆ college life so called golden life.ಗೊತ್ತಿಲ್ಲದೆ ಪಠ್ಯೇತರ ಚಟುವಟಿಕೆಗಳಿಗೆ ತಡೆಗೋಡೆ.ಓದುವದಕ್ಕೆ ಬಹು ಪ್ರಾಮುಖ್ಯತೆ ಕೊಟ್ಟಂತ ಭಾವನೆ (ಈಗ ನನ್ನ ಅನಿಸಿಕೆ).ಹಾಗು ಹೀಗು ಪದವಿ ಶಿಕ್ಷಣ ಮುಗಿಯಿತು ಇಂಜಿನಿಯರ್ ಆಗಬೇಕೆಂಬ ಛಲದಲ್ಲಿ.ಚಿಕ್ಕಂದಿನಿಂದ ಟೀಚರ್ ಆಗಬೇಕೆಂದು autograph ಲ್ಲಿ ಬರೆದ ನೆನಪು.


ಇಂಜಿನಿಯರಿಂಗ್
life!!!
ಮಸ್ತಿ ತಂದದ್ದು.ತುಂಬಾ ಕಠಿಣ ಎಂಬುದು ಎಲ್ಲರ ಅಂಬೋಣ.ಆದರೂ 'ನನ್ನಿಂದ ಯಾಕೆ ಅಸಾಧ್ಯ' ಎಂಬ ಭಾವ.ಮನಸ್ಸು ಚಂಚಲತೆಗೆ ದಾರಿ ಮಾಡಿಕೊಡುವ ವಯಸ್ಸು."ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ " ಎಂದು ಹಾಡುವ ಗೆಳೆಯನ ಹುಡುಕಾಟ,ಅದರ ಜೊತೆ ಅಪ್ಪ ಅಮ್ಮನ ಭಯ :) :P :) :) :) (ಸಿಕ್ಕದಿದ್ದದ್ದು ಬೇರೆ ವಿಷಯ).. group activities,trip,seminar,project ಪಟ್ಟಿಯುದ್ದದ list ಯೊಂದಿಗೆ ಅಂತೂ ಇಂತೂ engineering distinction ದೊಂದಿಗೆ ಮುಗಿಯಿತು.ಸುರಳಿತವಾಗಿ ಮುಗಿದಿದ್ದಲ್ಲದೆ MNC ಯಲ್ಲಿ ಕೆಲಸವೂ ದೊರಕಿದ ಸಂದರ್ಭ.ಎಲ್ಲರಲ್ಲೂ ಹರ್ಷದ ಧನ್ಯವಾದಗಳು.ಮನಸಲ್ಲಿ ಎನೋ ಸಮಾಧಾನ. Wonderful life was being so.


ಸ್ವತಂತ್ರತೆಯ
ಜೀವನಕ್ಕೆ ಕಾಲಿಟ್ಟಿದ್ದೆನೆ ಅಷ್ಟೆ. ಅದರಲ್ಲಿಯ ಕಷ್ಟ-ನಷ್ಟ,ನೋವು-ನಲಿವುಗಳ ಪರಿಚಯ ಇನ್ನೂ ಕಾದಿದೆ.

ಸಂಬಂಧಗಳು ಕೊಂಡಿಗೆ ಕೊಂಡಿ ಸೇರಿಕೊಂಡಂತೆ ಬಾಲದಂತೆ ಇಲ್ಲಿಯ ತನಕವೂ ಬೆಳೆಯುತ್ತ ಬಂದಿದೆ.ಜೀವನದ ಸುಖ-ದುಃಖ ಸಮ್ಮಿಳಿತವಾಗಿ ಸಾಗಿ ಬಂದಿದೆ.ಕೊಂಡಿಯ ನಡುವೆ ಇರುವ ಅನ್ಯೋನ್ಯತೆಯ ಭಾವ ಭಾವುಕಳಾಗುವಂತೆ ಮಾಡುತ್ತದೆ.


ಜೀವನದ
ಮೊದಲ ಘಟ್ಟದಲ್ಲಿ ತಿದ್ದಿ ತೀಡಿ ನಮ್ಮನ್ನು ಮನುಷ್ಯರಾಗುವಂತೆ ಮಾಡಿದ ಇಲ್ಲಿಯವರೆಗಿನ ಗುರುಗಳಿಗೆ,ಹಿರಿಯರಿಗೆ ನನ್ನ ಭಾವಪೂರ್ವಕ ಪ್ರಣಾಮಗಳು.

ಚಿರಕಾಲ ಇರಲಿ ಈ ಸ್ನೇಹ,
ಚಿರಕಾಲ ಇರಲಿ ಈ ಪ್ರೇಮ,
ಚಿರಕಾಲ ಇರಲಿ ಈ ಹಾಡು,
ಚಿರಕಾಲ ಇರಲಿ ಈ ನೆನಪು,
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ,
ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ, ಲೋಕದಲ್ಲಿ ಸ್ನೇಹ ಚಿರಂಜೀವಿ.ಹಾಡು ಗುನುಗುಣಿಸಿದೆ. :)