Monday, November 21, 2011

ಅಪೇಕ್ಷೆ

ಕೂಗುತಿಹುದು ಮನದ ಗಡಿಯಾರ
ಎಚ್ಚರದ ಘಂಟೆಯನು ನೆನಪಿಸುತ

ಬದುಕುವುದು ಮೂರು ಕ್ಷಣ
ಅದರಲ್ಲಿ ಜಿಪುಣುತನ
ಲೋಕದ ನೀತಿಯು
ಪ್ರೀತಿ ಪ್ರೇಮ ಪ್ರಣಯವು

ಅಲ್ಲಿ ನೋಡು ಅವನೆಂದು
ಬೆಟ್ಟು ಮಾಡಿ ತೊರಿದರೆ
ಉಳಿದ ಬೆರಳುಗಳೆಲ್ಲವುಗಳು
ನಿನ್ನನೆ ನೊಡುತಿರೆ

ಧಾವಿಸದಿರು ಓ ಚಿನ್ನ
ಬಾ ಬೇಗ ಬೆಳಕಿನೆಡೆ
ತಾಳಿದವನು ಬಾಳಿಯಾನು
ಎಂಬುದರ ನೆಲೆ ಕಾಣು
ಮಾನವೀಯತೆಗೆ ಬೆಲೆ ನೀಡು
ಅನುಸರಿಸು ಕರುಣೆ ಒಲವಿನ ನೀತಿಯನು


No comments:

Post a Comment