Friday, August 19, 2011

ಮುಪ್ಪು-ನನ್ನ ಅನಿಸಿಕೆಗಳು





ಕೈಯಲ್ಲಿ ಊರುಗೋಲು, ಮಾಸಿದ ಬಟ್ಟೆ, ಕಣ್ಣಿಗೆ ದಪ್ಪ ಕನ್ನಡಕ , ಕೈ ಕಾಲುಗಳು ನಡುಗುತ್ತಿದ್ದರೂ ಸಂಜೆಯ ವಿಹಾರಕ್ಕೋ ಸಾಮನು ಖರೀದಿಗೋ ಬರುವ ಅಜ್ಜ-ಅಜ್ಜಿಯಂದಿರನ್ನು ನೋಡಿದರೆ ಮನ ಸಂಕಟಗೊಳಗಾಗುತ್ತೆ. ಸಣ್ಣ ಪುಟ್ಟ ಕಾಯಿಲೆಗೆ ನಮ್ಮ ಶಕ್ತಿ,ಆಸಕ್ತಿ ಕಳೆದುಕೊಳ್ಳುವ ನಾವು ಅವರನ್ನು ನೋಡಿ ನಾಚಿಕೆಗೊಳಬೇಕಷ್ಟೆ.

ನಮ್ಮ ಅಜ್ಜ-ಅಜ್ಜಿಯಂದಿರನ್ನೆ ಉದಾಹರಣೆಗೆ ತೆಗೆದುಕೊಂಡರೆ ಅವರು ಮನೆಯಲ್ಲಿ ಚಟುವಟಿಕೆಯಲ್ಲಿ ಲವಲವಿಕೆಯಲ್ಲಿ ತಾವಿನ್ನು ಮುಪ್ಪಿನಾವಸ್ಥೆಗೆ ತಲುಪಿದ್ದೆವೆ ಅನ್ನೊದನ್ನೆ ಮರೆತಿರುವಂತೆ ಇರುತ್ತಾರೆ. ಊಹೆಗು ನಿಲುಕದ ವಿಚಾರಗಳು ಸುಳಿದಾಡುತ್ತವೆ. ಅವರ ಮುದಿತನ ಕೆಲಸ ಕಾರ್ಯಕ್ಕೆ ಸ್ಪಂದಿಸದಿದ್ದರೂ ತಮ್ಮ ಸಹಾಯ ಹಸ್ತ ಹೊಂದಿಸಲು ಹೆಣಗಾಡುತ್ತಾರೆ. ತಮ್ಮ ಅಸಹಾಯಕತೆಗೆ ಕೊರಗುತ್ತಾರೆ.

ಮರೆವು ಮುಪ್ಪಿನ ಸಂಗಾತಿ. ಹಳೆಕಾಲದ ನೆನಪುಗಳು ನಿನ್ನೆಯ ನೆನಪಿನಂತಿರುತ್ತವೆ,ಈಗಿನ ನೆನಪುಗಳು ನೆನಪಿನ ಆಳಕ್ಕೆ ಇಳಿಯುವುದಿಲ್ಲ. ಆದರೆ ನಮ್ಮ ಕಾಲಮಾನಕ್ಕೆ ಮುಪ್ಪು ಅನ್ನೊದು ೪೦ ರ ಆಸು ಪಾಸಿನಲ್ಲಿ ಬರಬಹುದೆಂಬ ಹೇಳಿಕೆ :)

ತಮ್ಮ ಮನೆಯ ಮಕ್ಕಳ,ಮೊಮ್ಮಕ್ಕಳ ಉನ್ನತಿ,ವಿದ್ಯಾಭ್ಯಾಸಗಳ ಕುರಿತು ತಮ್ಮ ಆಜು ಬಾಜುವಿನ ಮನೆಯವರಿಗೆ ಹೇಳುವ ಪರಿ ಮನಸಿಗೆ ಮುದ ನೀಡುತ್ತವೆ. ಆದರೆ ಒಮ್ಮೊಮ್ಮೆ ತಮ್ಮ ಮುಪ್ಪಿನ ಬಗ್ಗೆ ಕೊರಗುವುದನ್ನು ಕಂಡು ಬೇಸರವಾಗುತ್ತದೆ. ಕಷ್ಟ ಕಾಲಗಳು ದೂರವಾಗಿ ಮನಸ್ಸು ನೆಮ್ಮದಿಯಿಂದ ಬದುಕುವ ಕಾಲದಲ್ಲಿ ಮುಪ್ಪು ಆವರಿಸಿ ಅವರ ಬದುಕುವ ಚೈತನ್ಯವನ್ನು ಕಸಿಯುತ್ತದೆ. ದೈಹಿಕ,ಮಾನಸಿಕ ಕಾರಣೀಭೂತಗಳು.

ಇನ್ನೋಂದೆಡೆ ,ವ್ರದ್ಧಾಶ್ರಮದಲ್ಲಿ ತಮ್ಮ ಕೊನೆಯ ಕ್ಷಣಗಳನ್ನು ಎಣಿಸುವ ತಾತ ಅಜ್ಜಿಯರನ್ನು ನೋಡಿದರೆ ಕಣ್ಣಲ್ಲಿ ತನ್ನಿಂದ ತಾನೆ ಕಣ್ಣೀರು ಹರಿದು ಕಣ್ಣು ತೇವಗೊಳ್ಳುತ್ತದೆ. ಚಿಕ್ಕಂದಿನಲ್ಲಿ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಉನ್ನತೋತ್ತಿಗೆ ಏರಿಸಿದವರನ್ನು ಮನೆಯಿಂದ,ಮನಸ್ಸಿಂದ ಹೊರದೊಬ್ಬುವ ಜನರಿಗೆ ಮನಸ್ಸು ಕ್ರೂರ ಭಾವನೆ ತಾಳುತ್ತದೆ. ಸುಖದ ಉಪ್ಪರಿಗೆಯಲ್ಲಿ ಇರುವಂತೆ ಮಾಡಿದ ದಿವ್ಯ ಚೈತನ್ಯಗಳಿಗೆ ಕತ್ತಲೆಯ ಜೀವನ ಒದಗಿಸುವುದು ನ್ಯಾಯವೇ???

ಪ್ರಕಟನೆ:
ಮನಸ್ಸಿಗೆ ಅನಿಸುವುದನ್ನು ಪ್ರಕಟಿಸುವುದು ತುಂಬಾ ಕಷ್ಟ ಆದರೂ ಚಿಕ್ಕ ಪ್ರಯತ್ನ.

ಕೊನೆಯಲ್ಲಿ ಒಂದು ಮಾತು.. ಇದ್ದಷ್ಟು ದಿನ ಮಾನವೀಯತೆಯಿಂದ ಬದುಕುವುದು ಲೇಸು. ಬದುಕಿ, ಬೇರೆಯವರಿಗೂ ಬದುಕಲು ಬಿಡಿ.

1 comment:

  1. ಲೇಖನ ಪರವಾಗಿಲ್ಲ...
    ಕನ್ನಡ ಅಕ್ಷರಗಳು ತಪ್ಪಾಗಿ ಮೂಡಿಬ೦ದಿವೆ,...ತಿದ್ದಿ ಬರೆದರೆ ಉತ್ತಮ....

    ReplyDelete